ಕಾಪು: ಆರೋಗ್ಯ ಮಾಹಿತಿ ಪಡೆಯಲು ಮನೆಗೆ ಬಂದ ಆಶಾ ಕಾರ್ಯಕರ್ತೆಯನ್ನುಸನ್ಮಾನಿಸಿದ ಕುಟುಂಬ !

Update: 2020-05-05 08:24 GMT

ಕಾಪು, ಮೇ 5: ಕೊಂಬಗುಡ್ಡೆ ಪರಿಸರದ ಕುಟುಂಬವೊಂದು ತಮ್ಮ ಮನೆಗೆ ಆರೋಗ್ಯ ಮಾಹಿತಿ ಪಡೆಯಲು ಬಂದ ಮಲ್ಲಾರ್ ಪರಿಸರದ ಆಶಾ ಕಾರ್ಯಕರ್ತೆ ಸುಮನಾ ಅವರನ್ನು ಮೇ 4ರಂದು ಗೌರವಿಸಿ, ಸನ್ಮಾನಿಸಿದೆ.

ಕೊರೋನ ವೈರಸ್ ಭೀತಿ ಆರಂಭವಾದ ದಿನದಿಂದಲೂ ಬಿಸಿಲನ್ನೂ ಲೆಕ್ಕಿಸದೆ ಪ್ರತಿ ಮನೆ ಮನೆಗೂ ಭೇಟಿ ನೀಡಿ ಆರೋಗ್ಯ ಮಾಹಿತಿ ಪಡೆಯು ತ್ತಿದ್ದ ಸುಮನಾ ಅವರನ್ನು ಶಾಲು ಹೊದಿಸಿ, ಹೂ ಹಾರ ಹಾಕಿ, ಉಡುಗೊರೆ ನೀಡುವ ಮೂಲಕ ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮನೆ ಮಾಲಕ ಶೇಖ್ ನಝೀರ್, ಅವರ ಸಹೋದರ ಇಲ್ಯಾಸ್ ಹಾಗೂ ಸ್ಥಳೀಯ ನಿವಾಸಿ ಉಷಾ ದೇವಾಡಿಗ ಹಾಗೂ ಮನೆ ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News