ಉಳ್ಳಾಲ: ದಿನಸಿ ಸಾಮಗ್ರಿಯ ಕಿಟ್ ವಿತರಣೆ

Update: 2020-05-17 16:20 GMT

ಉಳ್ಳಾಲ, ಮೇ 17: ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸೈಯದ್ ಸಿರಾಜ್‌ಅಹ್ಮದ್, ಹರಿಣಾಕ್ಷಿ ಬಸವರಾಜ್ ಉಳ್ಳಾಲ ಹಾಗೂ ಇತರ ದಾನಿಗಳ ನೆರವಿನಿಂದ ಉಳ್ಳಾಲ ಪ್ಯಾರಿಸ್ ಪಾರ್ಕ್‌ನ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ)ದ ಸಹಯೋಗದಲ್ಲಿ ಸಂಘದ 82 ಸದಸ್ಯರಿಗೆ ರೇಶನ್ ಕಿಟ್ ಮತ್ತು ನಗದು ಹಣವನ್ನು ನೀಡಲಾಯಿತು.

ಈ ಸಂದರ್ಭ ಉಳ್ಳಾಲದ ಇನ್‌ಲ್ಯಾಂಡ್ ಇಂಪಾಲ ಎಸೋಸಿಯೇಶನ್ ಕಾರ್ಯದರ್ಶಿ ಬೀನಾ ಸನಿಲ್ ಮತ್ತು ಸಂಘದ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಗಾರ್, ಮಾಜಿ ಅಧ್ಯಕ್ಷ ಇಸ್ಮಾಯೀಲ್ ಶೇಖಬ್ಬ ಸದಸ್ಯರಾದ ಫೈನಲ್ ಸಿದ್ದೀಕ್, ಅಬ್ದುಲ್ ಖಾದರ್, ಅಬ್ದುಲ್ ರವೂಫ್, ನವಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News