ಮೂಡುಬಿದಿರೆ : ಜವುಳಿ ವರ್ತಕರ ಸಂಘದಿಂದ ರಕ್ತದಾನ ಶಿಬಿರ

Update: 2020-05-17 16:30 GMT

ಮೂಡುಬಿದಿರೆ : ಜವುಳಿ ವರ್ತಕರ ಸಂಘ, ಮೂಡುಬಿದಿರೆ ಹಾಗು ಸಮಾಜ ಮಂದಿರ ಸಭಾ ಮೂಡುಬಿದಿರೆಯ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತನಿಧಿ ಮಂಗಳೂರು ಸಹಯೋಗದಲ್ಲಿ ಇಲ್ಲಿನ ಸಮಾಜ ಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು.

ಲಾಕ್ ಡೌನ್ ಆರಂಭವಾದ ದಿನದಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಅಸಾಧ್ಯವಾಗಿತ್ತು. ಪರಿಣಾಮವಾಗಿ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಉಂಟಾಗಿತ್ತು. ನೆಗೆಟಿವ್ ಗುಂಪುಗಳ ರಕ್ತಕ್ಕಾಗಿ ರೋಗಿಗಳ ಸಂಬಂಧಿಕರು ಒದ್ದಾಟ ನಡೆಸುತಿದ್ದರು. ಈ ಕೊರತೆಯನ್ನು ನೀಗಿಸಲು  ಮೂಡುಬಿದಿರೆಯ ಜವುಳಿ ವರ್ತಕರ ಸಂಘ ಮತ್ತು ಸಮಾಜ ಮಂದಿರ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಉದ್ಯಮಿಗಳ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಬಿರದ ಯಶಸ್ಸಿಗೆ ರವೀಂದ್ರ ಪೈ, ಪೂರ್ಣಚಂದ್ರ ಜೈನ್, ಬೋರ್ಕರ್, ಸದಾಶಿವ ರಾವ್ ಮತ್ತಿತರರು ಶ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News