ಮಂಗಳೂರು: ಹಳಿ ತಪ್ಪಿದ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ರೈಲು

Update: 2020-05-19 08:31 GMT

ಮಂಗಳೂರು, ಮೇ 19: ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಶ್ರಮಿಕ್ ರೈಲು ಹಳಿ ತಪ್ಪಿದ ಘಟನೆ ಸೋಮವಾರ ತಡರಾತ್ರಿ ನಗರದ ಪಡೀಲ್ ಸಮೀಪ ನಡೆದಿದೆ.

ಕೇರಳದ ತಿರುವೂರುನಿಂದ ಜೈಪುರದವರೆಗೆ ತೆರಳುತ್ತಿದ್ದ ಈ ರೈಲು ಸೋಮವಾರ ಮಧ್ಯರಾತ್ರಿ 12:30ರ ಸುಮಾರಿಗೆ ಮಂಗಳೂರಿನ ಪಡೀಲು ಬಳಿ ಹಳಿತಪ್ಪಿದೆ. ಆದರೆ ಯಾವುದೇ ಪ್ರಯಾಣಿಕರಿಗೆ ಅಪಾಯಗಳಾಗಿಲ್ಲ.

ಮುಂಜಾನೆ 4:30ರ ಸುಮಾರಿಗೆ ರೈಲಿನ ಇಂಜಿನ್ ಬದಲಾಯಿಸಿ ರೈಲನ್ನು ಕಳುಹಿಸಲಾಗಿದೆ. ಹಳಿ ತಪ್ಪಿದ ರೈಲಿನ ಇಂಜಿನನ್ನು ರೈಲ್ವೆ ತಂತ್ರಜ್ಞರು ಸರಿಪಡಿಸಿದ್ದಾರೆ. ರೈಲ್ವೇ ಸಿಬ್ಬಂದಿ ಹಳಿಯನ್ನು ದುರಸ್ತಿಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News