ತೋಕೆ, ವರ್ಕಾಡಿ: ಟೀಮ್ ಬಿ-ಹ್ಯೂಮನ್, ಹಿದಾಯ ಫೌಂಡೇಶನ್ನಿಂದ ರಮಝಾನ್ ಕಿಟ್ ವಿತರಣೆ
Update: 2020-05-23 05:40 GMT
ಮಂಗಳೂರು, ಮೇ 23: ಕೇರಳ ಗಡಿ ಪ್ರದೇಶವಾದ ಮಂಜೇಶ್ವರ ಸಮೀಪದ ತೋಕೆ ಮತ್ತು ವರ್ಕಾಡಿ ಪ್ರದೇಶಗಳಲ್ಲಿ ಮಂಗಳೂರಿನ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್, ದ.ಕ. ಕಾರ್ಡಿನೇಶನ್ ಸಹಯೋಗದೊಂದಿಗೆ ಅರ್ಹ ಕುಟುಂಬಗಳಿಗೆ ರಮಝಾನ್ ಕಿಟ್ ಗಳನ್ನು ವಿತರಿಸಿತು.
ತೋಕೆ ಬದ್ರಿಯಾ ನಗರದಲ್ಲಿರುವ ಬದ್ರಿಯಾ ಜುಮಾ ಮಸ್ಜಿದ್ ಖತೀಬರು ದುಆ ಮೂಲಕ ಕಿಟ್ ವಿತರಣೆಗೆ ಚಾಲನೆ ನೀಡಿದರು. ಜಮಾಅತ್ನ ಅರ್ಹ 40 ಕುಟುಂಬಗಳು ಮತ್ತು ವರ್ಕಾಡಿ ಮುಹಿಯುದ್ದೀನ್ ಜುಮಾ ಮಸ್ಜಿದ್ ಜಮಾಅತ್ನ ಅರ್ಹ 25 ಕುಟುಂಬಗಳಿಗೆ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿ-ಹ್ಯೂಮನ್ ಸ್ಥಾಪಕ ಅಧ್ಯಕ್ಷರಾದ ಆಸಿಫ್ ಡೀಲ್ಸ್, ಅಲ್ತಾಫ್, ಶಮೀಮ್, ಸಲೀಂ ಯು.ಬಿ., ಅಶ್ರಫ್ ಐನ, ಮುನ್ನ ಕಮ್ಮರಡಿ, ರಾಶ್ ಬ್ಯಾರಿ, ಕರೀಂ ಎನ್.ಎಸ್., ಇಕ್ಬಾಲ್ ತಿಲಪದವು ಉಪಸ್ಥಿತರಿದ್ದರು.