ಕುದ್ರೋಳಿ: ನಿಲ್ಲಿಸಿದ್ದ ಕಾರಿಗೆ ಹಾನಿ; ದೂರು

Update: 2020-05-29 06:18 GMT

ಮಂಗಳೂರು, ಮೇ 29: ಮನೆ ಸಮೀಪ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿಗೈದು ಹಾನಿ ಮಾಡಿರುವ ಘಟನೆ ಕುದ್ರೋಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಅಶ್ರಫ್ ಕಿನಾರ ಎಂಬವರ ಕುದ್ರೋಳಿಯಲ್ಲಿರುವ ತನ್ನ ಮನೆ ಸಮೀಪ ನಿಲ್ಲಿಸಿದ್ದ ಕಾರಿನ ಗಾಜನ್ನು ಗುರುವಾರ ರಾತ್ರಿ ಕಿಡಿಗೇಡಿಗಳು ಹಾನಿಗೈದಿದ್ದಾರೆ.

ಈ ಬಗ್ಗೆ ಬಂದರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News