ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲಾ ನಿಧನ

Update: 2020-05-29 17:54 GMT

ಅಹ್ಮದಾಬಾದ್, ಮೇ 29: ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲಾ(89) ಅವರು ಶುಕ್ರವಾರ ಇಲ್ಲಿಯ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಾರದ ಹಿಂದೆ ನ್ಯುಮೋನಿಯಾ ಹೋಲುವ ಲಕ್ಷಣಗಳು ಕಂಡು ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಅವರ ದೇಹಸ್ಥಿತಿ ವಿಷಮಿಸಿದ್ದರಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಅವರು ಪುತ್ರರಾದ ನಸ್ತುರ್ ಮತ್ತು ಫರ್ದೌನ್ ಹಾಗೂ ಪುತ್ರಿ ನಝ್ರೀನ್ ಅವರನ್ನು ಅಗಲಿದ್ದಾರೆ.

ತಂದೆ ಕೊರೋನ ವೈರಸ್ ಅಥವಾ ನ್ಯುಮೋನಿಯಾದಿಂದ ಮೃತಪಟ್ಟಿಲ್ಲ. ಅವರ ಮಿದುಳಿಗೆ ಆಮ್ಲಜನಕ ಪೂರೈಕೆಯಾಗದೇ ಮೃತಪಟ್ಟಿದ್ದಾರೆ ಎಂದು ನಸ್ತುರ್ ಸುದ್ದಿಗಾರರಿಗೆ ತಿಳಿಸಿದರು.

ತನ್ನ ಅಂತ್ಯಸಂಸ್ಕಾರ ವೈಭವದಿಂದ ನಡೆಯಬೇಕೆಂದು ಅವರು ಬಯಸಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಅದು ಸಾಧ್ಯವಿಲ್ಲ. ಖಮಾಸಾದಲ್ಲಿಯ ಪಾರ್ಸಿ ಮಂದಿರದಲ್ಲಿ ಅವರಿಗಾಗಿ ಪ್ರಾರ್ಥನೆಗಳು ಆರಂಭಗೊಂಡಿವೆ ಎಂದು ಅಹ್ಮದಾಬಾದ್‌ನ ಉದ್ಯಮಿ ಹಾಗೂ ದಾರುವಾಲಾರ ಸ್ನೇಹಿತ ಬೆಹ್ರಾಮ್ ಮೆಹ್ತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News