ವಿಶ್ವ ತಂಬಾಕು ರಹಿತ ದಿನ: ಕಲಾಕೃತಿ ಅನಾವರಣ
Update: 2020-05-31 16:20 GMT
ಉಡುಪಿ, ಮೇ 31: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಆಶ್ರಯದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ಕಲಾಕೃತಿ ಜೂ.1ರಂದು ಅನಾವರಣಗೊಳ್ಳಲಿದೆ.
ತಂಬಾಕು ತಯಾರಕರು ಯುವಕರನ್ನು ತಂಬಾಕು ಸೇವನೆಯ ಬಲೆಗೆ ಬೀಳಿಸುವ ಬಗ್ಗೆ ಜಾಗೃತಿ ಮೂಡಿಸುವುದನ್ನು ಬಿಂಬಿಸುವ ಈ ಕಲಾಕೃತಿಯು ಸಾರ್ವಜನಿಕರಿಗೆ ಒಂದು ವಾರಗಳ ಕಾಲ ಪ್ರದರ್ಶನಕ್ಕೆ ಮುಕ್ತವಾಗಿರುತ್ತದೆ ಎಂದು ಕಲಾವಿದ ಶ್ರೀನಾಥ್ ಮಣಿಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.