ಕೊರೋನ ಎಫೆಕ್ಟ್: ಬೀದಿಗೆ ಬಿದ್ದ ದಂಪತಿಯ ರಕ್ಷಣೆ

Update: 2020-05-31 16:40 GMT

ಉಡುಪಿ, ಮೇ 31: ಕೊರೋನ ಸಾಂಕ್ರಾಮಿಕ ರೋಗದ ಕಾರಣದಿಂದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಅಸಹಾಯಕ ಗಂಡ ಹೆಂಡತಿ ಯರನ್ನು ರಕ್ಷಿಸಿರುವ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ, ದಂಪತಿಯನ್ನು ಅವರ ಊರಾದ ಧರ್ಮಸ್ಥಳಕ್ಕೆ ಬಾಡಿಗೆ ಕಾರಿನ ಮೂಲಕ ಕಳುಹಿಸಿದ ಘಟನೆ ರವಿವಾರ ರಾತ್ರಿ ವೇಳೆ ನಡೆದಿದೆ.

ಧರ್ಮಸ್ಥಳ ಮೂಲದ ಸಂತೋಷ ಹಾಗೂ ಭವಾನಿ ದಂಪತಿ ಉಡುಪಿಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು ಎರಡು ದಿನಗಳಿಂದ ಕರಾವಳಿ ಬೈಪಾಸ್ ಬಳಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದರು. ತಿನ್ನಲು ಆಹಾರವಿಲ್ಲ, ಕೈಯಲ್ಲಿ ದುಡ್ಡಿಲ್ಲದೆ ಕಣ್ಣೀರು ಹಾಕುತ್ತಿದ್ದ ದಂಪತಿಯನ್ನು ಗಮನಿಸಿದ ವಿಶು ಶೆಟ್ಟಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ದಂಪತಿಗಳ ಅಸಹಾಯಕತೆಯನ್ನು ಕಂಡ ವಿಶು ಶೆಟ್ಟಿ ಬಾಡಿಗೆ ಕಾರಿನ ಮೂಲಕ ಅವರ ಊರಾದ ಧರ್ಮಸ್ಥಳಕ್ಕೆ ಕಳುಹಿಸಿಕೊಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ವಿಶು ಶೆಟ್ಟಿಯವರ ಮಿತ್ರ ಕರುಣಾಕರ ಪೂಜಾರಿ ನೊಂದವರಿಗೆ ಆರ್ಥಿಕ ನೆರವು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News