ಕುಂದಾಪುರ ತಹಶೀಲ್ದಾರ್ ಆನಂದಪ್ಪ ಅಧಿಕಾರ ಸ್ವೀಕಾರ
Update: 2020-05-31 16:43 GMT
ಕುಂದಾಪುರ, ಮೇ 31: ಕುಂದಾಪುರ ತಾಲೂಕು ತಹಶೀಲ್ದಾರ್ ಆಗಿ ಕೆ. ಬಿ.ಆನಂದಪ್ಪನಾಯ್ಕ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಸೇವಾ ನಿವೃತ್ತಿ ಹೊಂದಿದ ಹಿಂದಿನ ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ನೂತನ ತಹಶೀಲ್ದಾರ್ಗೆ ಅಧಿಕಾರ ಹಸ್ತಾಂತರಿಸಿದರು. ಆನಂದಪ್ಪ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಚುನಾವಣಾ ಸಮಯದಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.