ಮುಂಬಯಿ ತುಳು, ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ: ವೆಲ್ಪೇರ್ ಪಾರ್ಟಿ

Update: 2020-06-02 07:28 GMT

ಮಂಗಳೂರು, ಜೂ. 2:  ಮುಂಬೈ ತುಳುವರು ಮತ್ತು ಕನ್ನಡಿಗರೆಂದರೆ ಕೇವಲ ಉದ್ಯಮಿಗಳ ಕೂಟ ಮಾತ್ರವಾಗಿರದೆ ಸಾಕಷ್ಟು ಮಧ್ಯಮ ವರ್ಗದ ಜನರು ಹಾಗೂ ಕಾರ್ಮಿಕ ಬಡಪಾಯಿಗಳನ್ನು ಹೊಂದಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಸರಿಯಾದ ಕೆಲಸವಿಲ್ಲದೆ, ವೇತನರಹಿತವಾಗಿ ತಮ್ಮ ಒಪ್ಪೊತ್ತಿನ ಆಹಾರಕ್ಕೂ ಬವಣೆ ಪಡುತ್ತಿರುವ ಅದೆಷ್ಟೋ ಜನರು ಕೂಡಾ ಇದೇ ವರ್ಗದಲ್ಲಿದ್ದು ಅವರೆಲ್ಲರೂ ಹೇಗಾದರೂ ಒಮ್ಮೆ ತಮ್ಮ ಊರಿಗೆ ಮರಳಿದರೆ ಸಾಕು ಎನ್ನುವ ಆಶಾಭಾವನೆಯಲ್ಲಿ ಸರಕಾರ ತಮ್ಮನ್ನು, ಅವರವರ ಮನೆಗೆ ಸೇರಿಸುವ ವ್ಯವಸ್ಥೆಯ ಬಗ್ಗೆ ಏನಾದರೊಂದು ನಿರ್ಣಯವನ್ನು ಕ್ಷಿಪ್ರವಾಗಿ ಕೈಗೊಳ್ಳಬಹುದೆಂಬ ದಿನಗಳನ್ನು ಎದುರು ನೋಡುತ್ತಿದ್ದಾರೆ. ಆದ್ದರಿಂದ, ಮುಂಬೈ, ಪುಣೆ, ಮತ್ತು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಸಿಲುಕಿರುವ ವಿಶೇಷವಾಗಿ ಕರಾವಳಿ ವಲಯದ ತುಳುವರನ್ನು ಸೇರಿದಂತೆ ಎಲ್ಲಾ ಕನ್ನಡಿಗರನ್ನು ಸರಕಾರ ಅವರವರ ಮನೆಗಳಿಗೆ ಅಥವಾ ಅವರವರ ಕುಟುಂಬದವರಿಗೆ ತಲುಪಿಸುವ ಕಾರ್ಯವನ್ನು  ಬಹಳ ತುರ್ತಾಗಿ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ  ಕೊರೋನ ಭೀತಿಯು ಕರ್ನಾಟಕದಲ್ಲಿನ ಮಟ್ಟಕ್ಕಿಂತ ಅಧಿಕವೇ ಇರುವುದರಿಂದ, ಇನ್ನು ಇವರ ವಾಪಾಸಾತಿಗೆ ಮೀನ-ಮೇಷವೆಣಿಸುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಜನರು ಅಪಾಯಕ್ಕೆ ಸಿಲುಕುವ ಅಪಾಯವಿದೆ. ಆದ್ದರಿಂದ ಸರಕಾರವು ಜೂನ್ 8, 15 ಎಂದು ಗಡುವುಗಳನ್ನು ವಿಸ್ತರಿಸುತ್ತಾ ಇನ್ನಷ್ಟು ದಿನಗಳನ್ನು ಮುಂದೂಡದೆ ಕೂಡಲೇ ಅವರನ್ನು ಹಂತ ಹಂತವಾಗಿ ಕರೆತರುವ ಹಾಗೂ ತರುವಾಯ ಅವರ ಕ್ವಾರಂಟೈನ್ ವ್ಯವಸ್ಥೆಗಳ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News