ಬಂಡೆಗೆ ಅಪ್ಪಳಿಸಿದ ದೋಣಿ: ಅಸ್ವಸ್ಥ ಮೀನುಗಾರ ಸಾವು

Update: 2020-06-04 16:47 GMT

ಕುಂದಾಪುರ, ಜೂ.4: ಕುಂಭಾಶಿ ಗ್ರಾಮದ ಕೊರವಡಿ ಸಮುದ್ರದಲ್ಲಿ ಇತರ ಮೀನುಗಾರರೊಂದಿಗೆ ಪಾತಿದೋಣಿಯಲ್ಲಿ ಮೀನುಗಾರಿಕೆ ನಡೆಸುತಿದ್ದ ಕೊರವಡಿ ಗ್ರಾಮ ಕುಂಭಾಶಿಯ ಗುಡ್ಡಿಮನೆ ಕೃಷ್ಣ (60) ಎಂಬವರು ಮಂಗಳವಾರ ಬೆಳಗ್ಗೆ 7:30ರ ಸುಮಾರಿಗೆ ಸಮುದ್ರ ಅಲೆಯ ಅಬ್ಬರ ಜೋರಾಗಿ ದೋಣಿಗೆ ಅಪ್ಪಳಿಸಿದ್ದರಿಂದ ದೋಣಿಯಲ್ಲಿ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾದರು.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News