ಉಡುಪಿ: ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ

Update: 2020-06-05 12:20 GMT

ಉಡುಪಿ, ಜೂ.5: ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾಲು ಗಿಡ ನೆಡುವ ಕಾರ್ಯಕ್ರಮವು ಬೈಲಕೆರೆ ವಾರ್ಡಿನ ಶಾರದನಗರದಲ್ಲಿ ಇಂದು ನಡೆಯಿತು.

ಕಾರ್ಯಕ್ರಮಕ್ಕೆ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ ಚಾಲನೆ ನೀಡಿದರು. ಅರಣ್ಯರಕ್ಷಕ ಕೇಶವ ಪೂಜಾರಿ, ನಗರಸಭೆ ಸದಸ್ಯ ಗಿರೀಶ್ ಅಂಚನ್, ಉಮೇಶ್ ಬೈಲೂರು, ಮಂಜುನಾಥ್ ಹೆಬ್ಬಾರ್, ಶೇಖ್ ಇಸ್ಮಾಯಿಲ್, ಸಾಮಾಜಿಕ ಕಾರ್ಯಕರ್ತ ರಾಧಕೃಷ್ಣ ಮೆಂಡನ್, ಹರೀಶ್ ಪೂಜಾರಿ, ಸಮಿತಿಯ ಪ್ರಮುಖರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಆಶಾಕಾರ್ಯಕರ್ತೆ ಉಮಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News