ಮಿಥುನ್ ರೈ ನೇತೃತ್ವದಲ್ಲಿ ಕೇರಳದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ
Update: 2020-06-05 12:47 GMT
ಮಂಗಳೂರು, ಜೂ.5: ಕೊರೋನ-ಲಾಕ್ಡೌನ್ನಿಂದಾಗಿ ನಗರದಲ್ಲಿ ಬಾಕಿಯಾಗಿದ್ದ ಕೇರಳದ ವೈದ್ಯಕೀಯ ವಿದ್ಯಾರ್ಥಿಗಳಿಗೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಎನ್ಎಸ್ಯುಐ ವತಿಯಿಂದ ಕಲ್ಪಿಸಲಾಗಿದ್ದ ಬಸ್ ವ್ಯವಸ್ಥೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಚಾಲನೆ ನೀಡಲಾಯಿತು.
2ನೇ ಹಂತದ ಈ ವ್ಯವಸ್ಥೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು 2 ಬಸ್ಗಳಲ್ಲಿ ಸಂಚರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಇಬ್ರಾಹೀಂ ಕೋಡಿಜಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಜಿಪಂ ಸದಸ್ಯ ಶಾಹುಲ್ ಹಮೀದ್, ನಝೀರ್ ಬಜಾಲ್, ಅನ್ಸಾರುದ್ದೀನ್ ಸಾಲ್ಮರ, ಸವಾದ್ ಸುಳ್ಯ, ಶೌನಕ್ ರೈ, ಸವಾದ್ ಗೂನಡ್ಕ, ಸಿಎಂ ಮುಸ್ತಫ ಉಪಸ್ಥಿತರಿದ್ದರು.