ಭಟ್ಕಳ: ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ
Update: 2020-06-27 17:36 GMT
ಭಟ್ಕಳ : ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ತಾಲೂಕಿನ ವೆಂಕ್ಟಾಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿ ವೆಂಕಟರಮಣ ಶನಿಯಾರ ಮೊಗೇರ(66) ಎಂದು ತಿಳಿದು ಬಂದಿದೆ. ಇವರು ಗುರುವಾರ ಸಂಜೆ ಮನೆಯಿಂದ ಹೋದ ವ್ಯಕ್ತಿ ನಂತರ ನಾಪತ್ತೆಯಾಗಿದ್ದರು. ಇಂದು ತಾಲೂಕಿನ ವೆಂಕ್ಟಾಪುರ ನದಿಯಲ್ಲಿ ಶವ ತೇಲುತ್ತಿರುವುದನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.