ಕೊರೋನಿಲ್ ಕುರಿತು ಜನರನ್ನು ದಾರಿತಪ್ಪಿಸಬೇಡಿ: ಪತಂಜಲಿಗೆ ಮಹಾರಾಷ್ಟ್ರ ಸಚಿವರ ಎಚ್ಚರಿಕೆ

Update: 2020-07-03 16:21 GMT

ಮುಂಬೈ,ಜು.3: ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಲಿ.ತಯಾರಿಸಿರುವ ಕೊರೋನಿಲ್ ಔಷಧಿಯು ಕೋವಿಡ್-19ನ್ನು ಗುಣಪಡಿಸುವುದಿಲ್ಲ ಎಂದು ಶುಕ್ರವಾರ ಇಲ್ಲಿ ತಿಳಿಸಿದ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಆಡಳಿತ ಸಚಿವ ರಾಜೇಂದ್ರ ಶಿಂಗ್ಣೆ ಅವರು, ಕಂಪನಿ ತನ್ನ ಔಷಧಿ ಕೊರೋನಾ ವೈರಸ್‌ನ್ನು ಗುಣಪಡಿಸುತ್ತದೆ ಎಂದು ಹೇಳುವ ಮೂಲಕ ಜನರಲ್ಲಿ ಗೊಂದಲವನ್ನು ಸೃಷ್ಟಿಸಿದರೆ ರಾಜ್ಯ ಗೃಹ ಸಚಿವಾಲಯದ ನೆರವಿನಿಮದ ಅದರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವುದಾಗಿ ಎಚ್ಚರಿಕೆಯನ್ನು ನೀಡಿದರು.

ಪತಂಜಲಿ ತನ್ನ ಕೊರೋನಿಲ್ ಔಷಧಿಯನ್ನು ರೋಗ ನಿರೋಧಕ ಶಕ್ತಿವರ್ಧಕವಾಗಿ ಮಾತ್ರ ಮಾರಾಟ ಮಾಡಬಹುದು ಎಂದು ಕೇಂದ್ರ ಆಯುಷ್ ಸಚಿವಾಲಯವೂ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.

ಔಷಧಿಯ ಕೊರೋನಿಲ್ (ಕೊರೋನಾ +ನಿಲ್) ಹೆಸರಿನಿಂದಾಗಿಯೂ ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದು ಹೇಳಿದ ಶಿಂಗ್ಣೆ,ಈ ಔಷಧಿಯು ಕೊರೋನ ವೈರಸ್ ಸೋಂಕನ್ನು ಗುಣಪಡಿಸುವುದಿಲ್ಲ ಎನ್ನುವುದನ್ನು ಗಮನಿಸುವಂತೆ ಅವರನ್ನು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News