ಉಡುಪಿಯ ಹೋಟೆಲ್ ಉದ್ಯಮಿ ಆತ್ಮಹತ್ಯೆ
Update: 2020-07-06 18:46 GMT
ಉಡುಪಿ, ಜು.6: ಸಮಾಜಸೇವಕ, ಹೋಟೆಲ್ ಉದ್ಯಮಿ ಕಡಿಯಾಳಿಯ ರಘು ಭಟ್ ಯಾನೆ ರಾಘವೇಂದ್ರ ಭಟ್ (48) ಇಂದು ಸಂಜೆ ವೇಳೆ ಹಿರಿಯಡ್ಕ ಸಮೀಪದ ಅಂಜಾರಿನ ತೋಟದ ಮನೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಕೆಲವು ವರ್ಷಗಳ ಹಿಂದೆ ಉಡುಪಿ ನಗರಸಭೆ ಚುನಾವಣೆಯಲ್ಲಿ ಕಡಿಯಾಳಿ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದ ಇವರು ಪರಾಭವಗೊಂಡಿದ್ದರು ಇತ್ತೀಚೆಗೆ ಇವರು ಬಿಜೆಪಿ ಪಕ್ಷವನ್ನು ಸೇರಿದ್ದರು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ