ಪುತ್ತೂರು: ಮನೆಯ ಆವರಣ ಗೋಡೆ ಕುಸಿತ; ಮಹಿಳೆ ಮೃತ್ಯು

Update: 2020-07-07 10:01 GMT

ಪುತ್ತೂರು, ಜು.7: ಮನೆಯೊಂದರ ಆವರಣ ಗೋಡೆ ಕುಸಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ಇಂದು ಪರ್ಲಡ್ಕ ಗೋಳಿಕಟ್ಟೆಯಲ್ಲಿ ನಡೆದಿದೆ. 

ಕಳೆದ 3 ದಿನಗಳಿಂದ ಪುತ್ತೂರು ಆಸುಪಾಸಿನಲ್ಲಿ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಕಾಂಪೌಂಡ್ ಕುಸಿತಗೊಂಡಿದೆ ಎಂದು ತಿಳಿದುಬಂದಿದೆ.

ಪುತ್ತೂರು ಕೆಎಸ್ಆರ್ ಟಿಸಿ ಬಸ್ ಕಂಡೆಕ್ಟರ್ ಚಂದ್ರಶೇಖರ ಪಿ ಅವರ ಪತ್ನಿ ವಸಂತಿ ಯಾನೆ ಶೋಭಾ ಮೃತಪಟ್ಟ ಮಹಿಳೆ. ಇವರು ಮನೆಯ ಹಿಂಬದಿಯಲ್ಲಿ ಬೀಡಿ ಕಟ್ಟುತ್ತಿದ್ದರು. ಈ ಸಂದರ್ಭ ಇವರ ಮನೆಯ ಮೇಲ್ಬಾಗದಲ್ಲಿರುವ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದ್ದು, ಮಣ್ಣಿನಡಿ ಸಿಲುಕಿ ವಸಂತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ, ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ನಗರಸಭೆ ಆಯುಕ್ತೆ ರೂಪ ಶೆಟ್ಟಿ, ನಗರಸಭೆ ಸದಸ್ಯೆ ದೀಕ್ಷಾ ಪೈ ಭೇಟಿ ನೀಡಿದರು. 

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ತೆರವು ಕಾರ್ಯಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News