ಗುರುಪುರ ಗುಡ್ಡ ಕುಸಿತ ಪ್ರಕರಣ: ಸಂತ್ರಸ್ತರ ಮನೆಗೆ ಖಾಝಿ ಭೇಟಿ

Update: 2020-07-07 13:19 GMT

ಮಂಗಳೂರು, ಜು.7: ಗುರುಪುರ ಬಂಗ್ಲೆ ಗುಡ್ಡೆಯಲ್ಲಿ ರವಿವಾರ ನಡೆದ ದುರಂತದಲ್ಲಿ ಮೃತಪಟ್ಟ ಮಕ್ಕಳ ಮನೆಗೆ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಂಗಳವಾರ ಭೇಟಿ ನೀಡಿ ದುಆಗೈದು ಸಾಂತ್ವನ ಹೇಳಿದರು.

ಈ ಸಂದರ್ಭ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್‌ರ ಸಹೋದರ ಅನಿವಾಸಿ ಉದ್ಯಮಿ ನಿಸಾರ್ ಅಹ್ಮದ್ ಕಾರ್ಕಳ ಹಾಗೂ ಮಸೂದ್ ಹಾಜಿಯ ಕುಟುಂಬದವರ ಪರವಾಗಿ 25 ಸಾವಿರ ರೂ.ವನನು ಮೃತಪಟ್ಟ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ದಾರುನ್ನೂರ್ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಮದ್ರಸ ಮ್ಯಾನೇಜ್ಮೆಂಟ್ ಜಿಲ್ಲಾಧ್ಯಕ್ಷ ಐ. ಮೊಯ್ದಿನಬ್ಬ ಹಾಜಿ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ದಾರುನ್ನೂರ್ ಪಿಟಿಎ ಅಧ್ಯಕ್ಷ ಫಕೀರಬ್ಬ ಮಾಸ್ಟರ್, ಅದ್ದು ಹಾಜಿ ಸೆಂಟ್ರಲ್ ಮಾರ್ಕೆಟ್, ಸಮದ್ ಹಾಜಿ, ನೌಷಾದ್ ಹಾಜಿ ಸುರಲ್ಪಾಡಿ, ಅಬ್ದುಲ್ ರಶೀದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News