ಸಹಸ್ರನಾಮ ಸ್ತೋತ್ರಂ ಸಂಸ್ಕೃತ ಗ್ರಂಥ ಬಿಡುಗಡೆ

Update: 2020-07-10 12:35 GMT

ಉಡುಪಿ, ಜು.10: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಸಾಹಿತಿ ಹರಿಕೃಷ್ಣ ರಾವ್ ಸಗ್ರಿ ಸಂಗ್ರಹಿಸಿ ಪ್ರಕಾಶನ ಮಾಡಿರುವ ಶ್ರೀಶಂಕರ ಭಗವತ್ಪಾದಾಚಾರ್ಯ ಸಹಸ್ರನಾಮ ಸ್ತೋತ್ರಂ ಸಂಸ್ಕೃತ ಗ್ರಂಥದ ಬಿಡುಗಡೆ ಕಾರ್ಯಕ್ರಮ ಉಡುಪಿಯ ನಾಗರಿಕ ಸಮಿತಿಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಕೋಟಕ್ ಮಹೇಂದ್ರ ಬ್ಯಾಂಕಿನ ವ್ಯವಸ್ಥಾಪಕ ಎಂ.ದೀಪಕ್ ಕುಮಾರ್ ಗ್ರಂಥವನ್ನು ಬಿಡುಗಡೆಗೊಳಿಸಿದರು. ಉದ್ಯಮಿ ಮುರಳಿಧರ ಬಲ್ಲಾಳ್ ಕರ್ನ ಪಾಡಿ ಮಾತನಾಡಿ, ಶ್ರೀಶಂಕರಾಚಾರ್ಯರ ತತ್ವ ಸಿದ್ಧಾಂತಗಳು, ಆಧ್ಯಾತ್ಮ ಚಿಂತನೆಗಳು ಸಮಾಜದ ಮನೆ ಮನಗಳಲ್ಲಿ ಪಸರಿಸುವಂತೆಮಾಡಲಿ ಎಂದು ಶುಭಹಾರೈಸಿದರು.

ಸಾಹಿತಿ ಹರಿಕೃಷ್ಣರಾವ್ ಸಗ್ರಿ ಗ್ರಂಥ ಪರಿಚಯ ಮಾಡಿದರು. ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಲೇಖಕ ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News