ಆವರಣ ಗೋಡೆ ಕುಸಿದು ಮಹಿಳೆ ಮೃತ: ಪುತ್ತೂರು ಶಾಸಕರಿಂದ ರೂ. 5 ಲಕ್ಷ ಪರಿಹಾರ ಧನ ವಿತರಣೆ

Update: 2020-07-10 12:56 GMT

ಪುತ್ತೂರು: ನಗರಸಭಾ ವ್ಯಾಪ್ತಿಯ ಪರ್ಲಡ್ಕ ಗೋಳಿಕಟ್ಟೆ ಎಂಬಲ್ಲಿ ಮಾ.7ರಂದು ಆವರಣ ಗೋಡೆ ಕುಸಿದು ಮೃತಪಟ್ಟ ಗೃಹಿಣಿ ವಸಂತಿ ಯಾನೆ ಶೋಭಾ (49) ಅವರ ಕುಟುಂಬಕ್ಕೆ ಕರ್ನಾಟಕ ಸರಕಾರದಿಂದ ಮಂಜೂರಾದ ರೂ. 5ಲಕ್ಷ ಮೊತ್ತವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಶುಕ್ರವಾರ ಮೃತ ಮಹಿಳೆಯ ಮನೆಗೆ ತೆರಳಿ ಪತಿ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿದರು. 

ಕಳೆದ ಮಂಗಳವಾರ ಈ ಘಟನೆ ಸಂಭವಿಸಿ ವಸಂತಿ ಯಾನೆ ಶೋಭಾ ಅವರು ದಾರುವಣಾಗಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ದ.ಕ. ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೃತ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರಕಾರದಿಂದ ರೂ. 5 ಲಕ್ಷ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಪರಿಹಾರ ಧನವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಸ್ಥಳೀಯ ನಗರಸಭಾ ಸದಸ್ಯೆ ದೀಕ್ಷಾ ಪೈ, ಕಂದಾಯ ನಿರೀಕ್ಷಕ ರವಿ ಕುಮಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News