ಶಂಕರನಾರಾಯಣ: ಬಾವಿಗೆ ಬಿದ್ದ ಕಾಡುಕೋಣ ರಕ್ಷಣೆ

Update: 2020-07-10 16:29 GMT

ಶಂಕರನಾರಾಯಣ, ಜು.10: ಉಳ್ಳೂರು ಗ್ರಾಮದ ಮನರಹಳ್ಳಿ ಎಂಬಲ್ಲಿ ಅಕಸ್ಮಿಕವಾಗಿ ನೀರು ತುಂಬಿದ ಬಾವಿಗೆ ಬಿದ್ದ ಹೆಣ್ಣು ಕಾಡುಕೋಣವನ್ನು ಶಂಕರ ನಾರಾಯಣ ಅರಣ್ಯ ಇಲಾಖೆಯವರು ರಕ್ಷಿಸಿರುವ ಘಟನೆ ಜು.9ರಂದು ನಡೆದಿದೆ.

ಜು.8ರಂದು ರಾತ್ರಿ ವೇಳೆ ಕಾಡಿನಿಂದ ನಾಡಿಗೆ ಬಂದ ಕಾಡುಕೋಣ ಅಕಸ್ಮಿಕವಾಗಿ ಶಿವರಾಮ ಶೆಟ್ಟಿ ಎಂಬವರ ಆರಣ ಇಲ್ಲದ ಬಾವಿಗೆ ಬಿತ್ತೆನ್ನಲಾಗಿದೆ. ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಶಂಕರನಾರಾಯಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಕಾಡುಕೋಣವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News