ಕುಂದಾಪುರ: ಕಚೇರಿಯಿಂದ ಮೊಬೈಲ್ ಕಳವು

Update: 2020-07-10 16:32 GMT

ಕುಂದಾಪುರ, ಜು.10: ಕಚೇರಿಯಲ್ಲಿದ್ದ ಎರಡು ಮೊಬೈಲ್ ಕಳವಾಗಿರುವ ಘಟನೆ ಜು.8ರಂದು ಸಂಜೆ ವೇಳೆ ಕೋಟೇಶ್ವರದ ಬೀಜಾಡಿ ಕ್ರಾಸ್ ಎಂಬಲ್ಲಿ ನಡೆದಿದೆ.

ಮನೆಗೆ ತಾಗಿಕೊಂಡಿದ್ದ ನಾಗೇಶ ಕುಮಾರ್ ಎಂಬವರ ಕಚೇರಿಯ ಬಾಗಿಲು ತೆರೆದ ಒಳಗೆ ನುಗ್ಗಿದ ಕಳ್ಳರು, ಟೇಬಲ್ ಮೇಲೆ ಇರಿಸಿದ್ದ ಐಪೋನ್-11 ಮತ್ತು ರೆಡ್ಮಿನೋಟ್ ಮೊಬೈಲ್ ಗಳನ್ನು ಕಳವು ಮಾಡಿದ್ದಾರೆ. ಇವುಗಳ ಮೌಲ್ಯ 45,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News