ಗಂಗೊಳ್ಳಿ: ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ವಿಕಲಚೇತನರಿಗೆ ನೆರವು

Update: 2020-07-11 09:16 GMT

ಮಂಗಳೂರು, ಜು.11: ಸಂಕಷ್ಟದಲ್ಲಿರುವ ಗಂಗೊಳ್ಳಿ ದೊಡ್ಡಹಿತ್ಲು ಪ್ರದೇಶದ ವಿಕಲಚೇತನ ಕುಟುಂಬಕ್ಕೆ ದ.ಕ. ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮಾನವಿಯತೆಯ ದೃಷ್ಟಿಯಿಂದ 25,000 ರೂ. ಮೊತ್ತವನ್ನು ಗಂಗೊಳ್ಳಿ ಜಮಾಅತ್ ಮುಖಂಡರ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭ ಗಂಗೊಳ್ಳಿ ಜಮಾತುಲ್ ಮುಸ್ಲಿಮೀನ್ ಕಮಿಟಿಯ ಅಧ್ಯಕ್ಷ ಪಿ.ಎಂ.ಹಸೈನಾರ್ ಸಾಹೇಬ್,ಉಪಾಧ್ಯಕ್ಷ ಮುಹಮ್ಮದ್ ಇಬ್ರಾಹೀಂ ಎಂ.ಎಚ್., ಖಜಾಂಚಿ ಮುಹಮ್ಮದ್ ಹನೀಫ್, ಸದಸ್ಯರಾದ ಮುಹಮ್ಮದ್ ತಬ್ರೇಝ್, ಗ್ರಾಪಂ ಸದಸ್ಯರಾದ ದೇವಾನಂದ ಖಾರ್ವಿ ಹಾಗೂ ಖಲೀಲ್ ಉಪಸ್ಥಿತರಿದ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News