ಉಡುಪಿ: ಕೊರೋನ ಜಾಗೃತಿ, ಮಾಸ್ಕ್ ವಿತರಣೆ

Update: 2020-07-11 11:29 GMT

ಉಡುಪಿ, ಜು.11: ಚೈಲ್ಡ್‌ಲೈನ್ 1098 ಉಡುಪಿ ಮತ್ತು ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಮಲ್ಪೆ ಬಳಿಯ ಕೊಡಂಕೂರು ಪ್ರಮೋದ್ ಮದ್ವರಾಜ್ ಬಡಾವಣೆ ಇಲ್ಲಿ ಕೊರೋನಾ ಕುರಿತ ಜಾಗೃತಿ ಕಾರ್ಯಕ್ರಮ ಹಾಗೂಮಕ್ಕಳಿಗೆ ಮಾಸ್ಕ್ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಸುರೇಶ್ ಶೆಣೈ, ಕೊರೋನ ಮುಂಜಾಗೃತ ಕ್ರಮದ ಹಾಗೂ ಮಾಸ್ಕ್ ಧರಿಸುವುದರಿಂದ ಆಗುವ ಪ್ರಯೋಜನ, ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ರಾಧಿಕಾ ಲಕ್ಮ್ಷೀನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸ್ಥಳೀಯ ನಗರಸಭಾ ಸದಸ್ಯರಾದ ಸಂಪಾವತಿ, ರೋಟರಿ ಉಡುಪಿ ಕಾರ್ಯದರ್ಶಿ ದೀಪಾ ಭಂಡಾರಿ ಹಾಗೂ ಚೈಲ್ಡ್‌ಲೈನ್ ನಿರ್ದೇಶಕ ರಾದ ರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಮಕ್ಕಳೊಂದಿಗೆ, ಚೈಲ್ಡ್‌ಲೈನ್‌ನ ಸಿಬ್ಬಂದಿಗಳು ಹಾಗೂ ರೊೀಟರಿ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News