ನೇತ್ರಾವತಿ ಸೇತುವೆಯಲ್ಲಿ ಅಪಘಾತ ಪ್ರಕರಣ: ಸೋಮೇಶ್ವರ ಪುರಸಭೆ ಸೂಪರಿಂಟೆಂಡೆಂಟ್ ಸಹಿತ ಇಬ್ಬರ ಬಂಧನ

Update: 2020-07-11 16:06 GMT

ಮಂಗಳೂರು: ನೇತ್ರಾವತಿ ಸೇತುವೆಯಲ್ಲಿ ಅಪಘಾತ ನಡೆದು ಯುವಕನ ಸಾವಿಗೆ ಕಾರಣರಾದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರು ಚಾಲಕ ಸೋಮೇಶ್ವರ ಪುರಸಭೆ ಸೂಪರಿಂಟೆಂಡೆಂಟ್ ಕೃಷ್ಣ (40), ಸಿಮೆಂಟ್ ಸಾಗಾಟ ಲಾರಿ ಚಾಲಕ, ಕಾರ್ಕಳ ನಿವಾಸಿ ಸುರೇಂದ್ರ (30) ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 279 (ಆತುರದಿಂದ ವಾಹನ ಚಾಲನೆ), 337 (ಜೀವಹಾನಿ), 304 (ಎ) (ನಿರ್ಲಕ್ಷತನ) ಪ್ರಕರಣದಂತೆ ಕೇಸು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News