ಗಂಗೊಳ್ಳಿ: ಗದ್ದೆಯಲ್ಲಿ ಕುಸಿದು ಬಿದ್ದು ಕೃಷಿಕ ಮೃತ್ಯು

Update: 2020-07-12 15:30 GMT

ಗಂಗೊಳ್ಳಿ, ಜು.12: ಕೃಷಿ ಗದ್ದೆಯಲ್ಲಿ ನೆಟ್ಟಿ ಮಾಡುತ್ತಿದ್ದ ಕೃಷಿಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಜು.11ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಹಕ್ಲಾಡಿ ಗ್ರಾಮದ ಗೋಳಿಕಟ್ಟೆಯ ಯಳೂರು ನಿವಾಸಿ ಸುಧಾಕರ ಶೆಟ್ಟಿ(52) ಎಂದು ಗುರುತಿಸಲಾಗಿದೆ. ಇವರು ನೆಟ್ಟಿ ಮಾಡುತ್ತಿರುವಾಗ ಗದ್ದೆ ಯಲ್ಲಿಯೇ ಕುಸಿದು ಬಿದ್ದಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಇವರು ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News