ಅಯೋಧ್ಯೆ: ಸ್ಫೋಟಕ ತುಂಬಿಸಿ ಹಿಟ್ಟು ನೀಡಿದ ದುಷ್ಕರ್ಮಿಗಳು; ಭಾರೀ ಸ್ಫೋಟದಿಂದ ಹಸುವಿಗೆ ಗಾಯ

Update: 2020-07-13 16:29 GMT

ಹೊಸದಿಲ್ಲಿ: ಹಿಟ್ಟಿನೊಳಗೆ ಸ್ಫೋಟಕವನ್ನಿಟ್ಟು ಅದನ್ನು ಹಸುವೊಂದಕ್ಕೆ ತಿನ್ನಲು ನೀಡಿದ ಪರಿಣಾಮ ಸ್ಫೋಟಕ ಸಿಡಿದು ಹಸು ಗಂಭೀರವಾಗಿ ಗಾಯಗೊಂಡ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.

ಸ್ಫೋಟದ ತೀವ್ರತೆಗೆ ಹಸುವಿನ ದವಡೆ ಪುಡಿಯಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಬಂಧಿತರನ್ನು ಸತ್ಯನಾಮ್ ತ್ರಿವೇಣಿ, ಭೋಲಾ ರಾಮ್ ದಯಾಳ್ ಎಂದು ಗುರುತಿಸಲಾಗಿದೆ.

ಈ ಇಬ್ಬರು ಇದೇ ರೀತಿ ಕಾಡುಪ್ರಾಣಿಗಳು ಬೇಟೆಯಾಡುತ್ತಿದ್ದರು ಎಂದು ಅಯೋಧ್ಯೆಯ ಪೊಲೀಸ್ ಅಧಿಕಾರಿ ವಿರೇಂದ್ರ ವಿಕ್ರಮ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News