ರಾಜಸ್ಥಾನ ಕಾಂಗ್ರೆಸ್ ಶಾಸಕರ ಸಭೆ: ಮತ್ತೊಮ್ಮೆ ಗೈರಾದ ಪೈಲಟ್
Update: 2020-07-14 07:01 GMT
ಹೊಸದಿಲ್ಲಿ, ಜು.14: ಬಂಡಾಯ ನಾಯಕ ಸಚಿನ್ ಪೈಲಟ್ ರಾಜಸ್ಥಾನದಲ್ಲಿ ಇಂದು ಸತತ ಎರಡನೇ ದಿನ ನಡೆದ ಕಾಂಗ್ರೆಸ್ ಶಾಸಕರ ಸಭೆಯಿಂದ ದೂರ ಉಳಿದರು. ಸಭೆಗೆ ಗೈರು ಹಾಜರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಕಾಂಗ್ರೆಸ್ ಎಚ್ಚರಿಕೆ ರವಾನಿಸಿದೆ.
ಜೈಪುರದಲ್ಲಿ ನಡೆದಿರುವ ಶಾಸಕರ ಸಭೆಯಲ್ಲಿ ಗೈರು ಹಾಜರಾಗಿರುವವರ ವಿರುದ್ಧ ಕಾಂಗ್ರೆಸ್ ನೋಟಿಸ್ ನೀಡಿದೆ. ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಬೇಡಿಕೆಯನ್ನು ಪಕ್ಷದ ನಾಯಕತ್ವ ಚರ್ಚಿಸುವ ಮೊದಲು ಸಭೆಯಲ್ಲಿ ಹಾಜರಾಗಬೇಕೆಂದು ಕಾಂಗ್ರೆಸ್ ಪಕ್ಷ ಸಚಿನ್ ಪೈಲಟ್ಗೆ ಹೇಳಿತ್ತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ರನ್ನು ಬದಲಾಯಿಸಬೇಕೆನ್ನುವುದು ಸಚಿನ್ ಪೈಲಟ್ರ ಪ್ರಮುಖ ಬೇಡಿಕೆಯಾಗಿದೆ.