ಎಸ್ ವೈ ಎಸ್ ನಿಂದ ಕೋವಿಡ್ ಜಾಗೃತಿ ಕಾರ್ಯಕ್ರಮ
ಮಂಗಳೂರು, ಜು25: ದ.ಕ. ಜಿಲ್ಲಾ ಎಸ್ ವೈ ಎಸ್ ವೆಸ್ಟ್ ಸಮಿತಿ ಇದರ ವತಿಯಿಂದ ಕೋವಿಡ್ ಜಾಗೃತಿ ಹಾಗೂ ಕಾರ್ಯಾಚರಣೆ ಕುರಿತ ಕಾರ್ಯಕ್ರಮವು ನಾಟೆಕಲ್ ಸಮೀಪದ ತಿಬ್ಲಪದವು ಅಲ್ ಮದೀನಾ ಹಾಲ್ನಲ್ಲಿ ಇತ್ತೀಚೆಗೆ ಜರಗಿತು.
ಈ ಸಂದರ್ಭ ಪ್ರತಿ ಸೆಂಟರ್ಗಳಿಗೂ ಪಿಪಿಇ ಕಿಟ್ಗಳನ್ನು ವಿತರಿಸಲಾಯಿತು.
ಶಾಸಕ ಯುಟಿ ಖಾದರ್ ಮಾತನಾಡಿ ಜಿಲ್ಲಾ ಎಸ್ವೈಎಸ್ ಟೀಂ ಇಸಾಬ ಕಾರ್ಯಾಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ವೈಎಸ್ ಜಿಲ್ಲಾಧ್ಯಕ್ಷ ಸಿಎಚ್ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ ವಹಿಸಿದ್ದರು. ಡಾ. ರವಿಕುಮಾರ್ ಮತ್ತು ಡಾ. ಪಿಲಿಪ್ಸ್ ಮುಖ್ಯ ತರಬೇತುದಾರರಾಗಿದ್ದರು. ಎಸ್ವೈಎಸ್ ರಾಜ್ಯ ನಾಯಕ ಟಿ.ಎಂ ಮುಹಿಯುದ್ದೀನ್ ಕಾಮಿಲ್ ಸಖಾಫಿ ಮಯ್ಯಿತ್ ಪರಿಪಾಲನೆ ಕುರಿತು ವಿಷಯ ಮಂಡಿಸಿದರು. ಎಸ್ವೈಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಎಸ್ಎಂ.ಬಶೀರ್ ಹಾಜಿ, ಉಪಾಧ್ಯಕ್ಷ ಹಾಜಿ ಎನ್ಎಸ್ ಉಮರ್ ಮಾಸ್ಟರ್, ಜಿಲ್ಲಾ ನಾಯಕ ಬಿ.ಎಚ್ ಇಸ್ಮಾಯಿಲ್ ಕೆ.ಸಿ. ರೋಡ್,ತಿಬ್ಲೆಪದವು ಮದ್ರಸ ಅಧ್ಯಕ್ಷ ಸಿದ್ದೀಕ್ ಮದನಿ, ದೇರಳಕಟ್ಟೆ ಎಸ್ವೈಎಸ್ ಸೆಂಟರ್ ಅಧ್ಯಕ್ಷ ಇಸ್ಮಾಯಿಲ್ ಸಅದಿ, ಹನೀಫ್ ಸಖಾಫಿ ಉಪಸ್ಥಿತರಿದ್ದರು.