ಚತ್ತೀಸ್ಗಢ: 40 ಗೋವುಗಳು ಉಸಿರುಗಟ್ಟಿ ಸಾವು
Update: 2020-07-25 16:33 GMT
ರಾಯ್ಪುರ, ಜು. 26: ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯ ಇಕ್ಕಟ್ಟಾದ ಪಂಚಾಯತ್ ಭವನದಲ್ಲಿ ಕಟ್ಟಿ ಹಾಕಲಾಗಿದ್ದ ಸುಮಾರು 40 ಗೋವುಗಳು ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಗ್ರಾಮದ ಇಕ್ಕಟ್ಟಾದ ಪಂಚಾಯತ್ ಭವನದಲ್ಲಿ ಸರಪಂಚರೊಬ್ಬರು 60 ಜಾನುವಾರುಗಳನ್ನು ಕಳೆದ ಎರಡು ದಿನಗಳಿಂದ ಕಟ್ಟಿ ಹಾಕಿದ್ದರು. ಇವುಗಳಲ್ಲಿ 40 ಗೋವುಗಳು ಉಸಿರುಕಟ್ಟಿ ಮೃತಪಟ್ಟಿವೆ. 20 ಗೋವುಗಳನ್ನು ರಕ್ಷಿಸಲಾಗಿದೆ ಎಂದು ಡಾ. ಮಿಟ್ಟರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದೆ ಎಂದು ಬಿಲಾಸ್ಪುರದ ಪೊಲೀಸ್ ಅಧೀಕ್ಷಕ ಪ್ರಶಾಂತ್ ಅಗರ್ವಾಲ್ ತಿಳಿಸಿದ್ದಾರೆ.