ಪುಂಚಲಕಾಡು ಕೊಲೆ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ
Update: 2020-07-25 16:47 GMT
ಶಿರ್ವ, ಜು.25: ಕಳತ್ತೂರು ಗ್ರಾಮದ ಪುಂಚಲಕಾಡುವಿನಲ್ಲಿ ಜು.24ರಂದು ತನ್ನ ಸ್ನೇಹಿತ ಹೇಮಂತ್ ಪೂಜಾರಿ(45)ಯನ್ನು ಕೊಲೆಗೈದು ಮೃತದೇಹ ಸುಡಲು ಯತ್ನಿಸಿದ ಪ್ರಕರಣದ ಬಂಧಿತ ಆರೋಪಿ ಆಲ್ಬರ್ಟ್ ಡಿಸೋಜ(50) ಎಂಬಾತನಿಗೆ ಉಡುಪಿ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯನ್ನು ನಿನ್ನೆ ಸ್ಥಳದಲ್ಲಿಯೇ ಬಂಧಿಸಿರುವ ಪೊಲೀಸರು, ಇಂದು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿಯನ್ನು ಹಿರಿಯಡ್ಕ ಜೈಲಿಗೆ ಕರೆದೊಯ್ಯಲಾಗಿದೆ. ಹೇಮಂತ್ ಪೂಜಾರಿ ಮಟ್ಕಾ ಚೀಟಿ ಬರೆಯುತ್ತಿದ್ದು, ಅಲ್ಬರ್ಟ್ ಸ್ಥಳೀಯ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿದ್ದನು. ಲಾಕ್ಡೌನ್ನಿಂದಾಗಿ ಇಬ್ಬರಿಗೂ ಕೆಲಸ ಇರಲಿಲ್ಲ. ಹೇಮಂತ್ ತನ್ನ ಹೆಂಡತಿ ಮತ್ತು ಮಕ್ಕಳನ್ನು ತ್ಯಜಿಸಿದ್ದರೆ, ಅಲ್ಬರ್ಟ್ಗೆ ಮದುವೆ ಆಗಿಲ್ಲ. ಅಲ್ಬರ್ಟ್ ಮನೆಯಲ್ಲಿ ಒಂಟಿಯಾಗಿಯೇ ವಾಸವಾಗಿದ್ದನು ಎನ್ನಲಾಗಿದೆ