​ಉಡುಪಿ: ನಿರ್ಬಂಧ ಪಾಲನೆಯೊಂದಿಗೆ ಬಕ್ರೀದ್ ಆಚರಣೆ

Update: 2020-07-31 04:16 GMT

ಉಡುಪಿ, ಜು.೩೧: ಕೊರೊನಾ ಭೀತಿಯ ಮಧ್ಯೆ ಉಡುಪಿ ಜಿಲ್ಲೆಯಾದ್ಯಂತ ಈದುಲ್ ಅಝಾ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸರಕಾರದ ಮಾರ್ಗಸೂಚಿಯಂತೆ   ಆಚರಿಸಲಾಯಿತು 
ಬೆಳಗ್ಗೆ ಆರು ಗಂಟೆಯಿಂದ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದುಲ್ ಅಝಾ ಹಬ್ಬದ ವಿಶೇಷ ಸಾಮೂಹಿಕ ನಮಾಜ್ ಅನ್ನು ನೆರವೇರಿಸಲಾಯಿತು 
ಒಂದು ಬಾರಿಗೆ ಐವತ್ತು ಮಂದಿಗೆ ಮಾತ್ರ ಅವಕಾಶ ನೀಡಲಾಯಿತು. ಅದಕ್ಕಿಂತ ಹೆಚ್ಚು ಜನರಿರುವ ಮಸೀದಿಗಳಲ್ಲಿ ಎರಡು ಹಾಗೂ ಇನ್ನು ಕೆಲವು ಮಸೀದಿಗಳಲ್ಲಿ ಮೂರು ಬ್ಯಾಚ್ಗಳಾಗಿ ನಮಾಝ್ ನೆರವೇರಿಸಲಾಯಿತು 
ನಮಾಜ್ ಗೆ ಆಗಮಿಸುವವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್  ಬಳಕೆ ಕಡ್ಡಾಯ ಮಾಡಲಾಗಿತ್ತು. ಸುರಕ್ಷಿತ ಅಂತರ ಕಾಯ್ದುಕೊಂಡು ನಮಾಜ್ ಮಾಡಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News