ರಾಷ್ಟ್ರೀಯ ಕ್ರೀಡಾ ಆಯ್ಕೆ ಸಮಿತಿಗೆ ಸೆಹ್ವಾಗ್, ಸರ್ದಾರ್ ಸಿಂಗ್ ಸೇರ್ಪಡೆ

Update: 2020-07-31 14:49 GMT

ಹೊಸದಿಲ್ಲಿ, ಜು.31: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಹಾಕಿ ದಿಗ್ಗಜ ಸರ್ದಾರ್ ಸಿಂಗ್ ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರುಗಳನ್ನು ಆಯ್ಕೆ ಮಾಡಲು ಕ್ರೀಡಾ ಸಚಿವಾಲಯ ಶುಕ್ರವಾರ ರಚಿಸಿರುವ 12 ಸದಸ್ಯರ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

 ಕಳೆದ ವರ್ಷದಂತೆಯೇ ಈ ವರ್ಷವೂ ಒಂದೇ ಆಯ್ಕೆ ಸಮಿತಿಯು ಅಥ್ಲೀಟ್‌ಗಳು ಹಾಗೂ ಕೋಚ್‌ಗಳಲ್ಲಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಿದೆ. ಆಯ್ಕೆ ಸಮಿತಿಗೆ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಮುಕುಂದಕಮ್ ಶರ್ಮಾ ಅಧ್ಯಕ್ಷರಾಗಿದ್ದಾರೆ.

ಆಯ್ಕೆ ಸಮಿತಿಯಲ್ಲಿ ಮಾಜಿ ಟೇಬಲ್ ಟೆನಿಸ್ ಆಟಗಾರ್ತಿ ಮೋನಾಲಿಸಾ ಬರುವ್ಹಾ ಮೆಹ್ತಾ, ಬಾಕ್ಸರ್ ವೆಂಕಟೇಸನ್ ದೇವರಾಜನ್ ಅವರಿದ್ದಾರೆ.

ಹಾಕಿ ದಿಗ್ಗಜ ಧ್ಯಾನ್‌ಚಂದ್ ಜನ್ಮದಿನವಾಗಿರುವ ಆಗಸ್ಟ್ 29ರಂದು ಪ್ರತಿ ವರ್ಷ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News