2021ರಲ್ಲಿ ವಿಶ್ವಕಪ್ ಗೆಲುವಿಗೆ ಮತ್ತೊಂದು ಪ್ರಯತ್ನ: ಮಿಥಾಲಿ ರಾಜ್

Update: 2020-08-02 08:30 GMT

 ಹೊಸದಿಲ್ಲಿ: ಮುಂದಿನ ವರ್ಷ ವಿಶ್ವಕಪ್ ಗೆಲ್ಲುವತ್ತ ಭಾರತ ಮತ್ತೊಮ್ಮೆ ಪ್ರಯತ್ನ ನಡೆಸಲಿದೆ ಎಂದು ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

 ಎರಡು ಬಾರಿ ಭಾರತ ವಿಶ್ವಕಪ್ ಗೆಲ್ಲುವ ಹತ್ತಿರ ಬಂದಿತ್ತು. ಆದರೆ ತಂಡಕ್ಕೆ ಟ್ರೋಫಿಯನ್ನು ಎತ್ತಲು ಸಾಧ್ಯವಾಗಲಿಲ್ಲ. ಮಿಥಾಲಿ ಅವರ ನಾಯಕತ್ವದಲ್ಲಿ ಭಾರತವು 2017ರ ವಿಶ್ವಕಪ್ ಪಂದ್ಯದ ಫೈನಲ್ ತಲುಪಿತು.ಆದರೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋತಿತು.ಒಂದು ವರ್ಷದ ನಂತರ ವೆಸ್ಟ್ ಇಂಡೀಸ್‌ನಲ್ಲಿ ಟ್ವೆಂಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋಲು ಅನುಭವಿಸಿತು.

‘‘2013ರಲ್ಲಿ ಭಾರತ ವಿಶ್ವಕಪ್ ಆತಿಥ್ಯ ವಹಿಸಿದಾಗ ನಾವು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಲಿಲ್ಲ. ನನಗೆ ನೋವುಂಟಾಯಿತು ಮತ್ತು ಸಾಕಷ್ಟು ನಿರಾಶೆಯಾಗಿದೆ’’ ಎಂದು ಅವರು ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಕಾರ್ಯಕ್ರಮದಲ್ಲಿ ಹೇಳಿದರು.

‘‘ಇಷ್ಟು ವರ್ಷಗಳ ಕಾಲ ಆಡಿದ ನಂತರ, ಬಹುಶಃ ಒಂದು ವಿಶ್ವಕಪ್ ಗೆಲ್ಲದಿರುವುದು ಹೊರತುಪಡಿಸಿ, ನನ್ನ ಬಳಿ ಎಲ್ಲವೂ ಇತ್ತು. 2021 ರಲ್ಲಿ ಮತ್ತೆ ನಾನು ಮತ್ತೊಂದು ಪ್ರಯತ್ನವನ್ನು ಮಾಡಲಿದ್ದೇನೆ, ಆಶಾದಾಯಕವಾಗಿ ಪ್ರತಿಯೊಬ್ಬರ ಹಾರೈಕೆ ಮತ್ತು ದೇವರ ದಯೆ ಇದ್ದರೆ ನಾವು ವಿಶ್ವಕಪ್ ಗೆಲ್ಲುತ್ತೇವೆ’’ಎಂದು ಮಿಥಾಲಿ ರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News