ಬಾಯಾರು : ಒಂದೇ ಕುಟುಂಬದ ನಾಲ್ವರ ಕಡಿದು ಕೊಲೆ

Update: 2020-08-03 15:45 GMT

ಮಂಜೇಶ್ವರ : ಮಂಜೇಶ್ವರ ತಾಲೂಕಿನ ಪೈವಳಿಕೆ ಪಂಚಾಯತ್ ನ ಬಾಯಾರಿನಲ್ಲಿ ಒಂದೇ ಕುಟುoಬದ ನಾಲ್ವರನ್ನು ಕೊಲೆ ಮಾಡಿದ ಘಟನೆಯೊಂದು ವರದಿಯಾಗಿದೆ. ಸುದಂಬಲದ ಉದಯ (40) ಕೊಲೆ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ.

ಉದಯನನ್ನು ಊರಿನವರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕರ್ನಾಟಕ ಗಡಿ ಸಮೀಪದ ಬಾಯಾರಿನ ಕನ್ಯಾಲ ಎಂಬಲ್ಲಿ ಸೋಮವಾರ ರಾತ್ರಿ 7.30ರ ವೇಳೆ ಘಟನೆ ನಡೆದಿದೆ.

ಕೊಲೆಗೀಡಾದವರನ್ನು ಆರೋಪಿ ಉದಯನ ತಾಯಿಯ ಸಹೋದರರಾದ ಸದಾಶಿವ (54), ವಿಠಲ (52), ಬಾಬು (50), ತಾಯಿಯ ಸಹೋದರಿ ರೇವತಿ (58) ಎಂದು ತಿಳಿದು ಬಂದಿದೆ. ಕುಟುoಬ ಕಲಹದಲ್ಲಿ ಉಂಟಾದ ವಾಗ್ವಾದವೇ ಕೊಲೆಗೆ ಕಾರಣವಾಗಿದೆಯೆಂದು  ಪೊಲೀಸರು ಪ್ರಾಥಮಿಕ ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ಎಂದು ಸಮೀಪ ವಾಸಿಗಳು ಹಾಗೂ ಕುಟುoಬಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕಾಸರಗೋಡು ಡಿ.ವೈ.ಎಸ್.ಪಿ ಬಾಲಕೃಷ್ಣನ್ ನೇತೃತ್ವದ ಪೋಲೀಸರ ತಂಡ ಆರೋಪಿಯನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News