ತೋಡಿಗೆ ಬಿದ್ದು ವೃದ್ಧೆ ಸಾವು

Update: 2020-08-03 16:14 GMT

ಬೈಂದೂರು, ಆ.3: ತೋಟಕ್ಕೆ ಬರುತಿದ್ದ ವೃದ್ಧೆಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ತುಂಬಿ ಹರಿಯುತಿದ್ದ ತೋಡಿಗೆ ಬಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕಾಲ್ತೋಡು ಗ್ರಾಮದ ಮೂಡುರು ಎಂಬಲ್ಲಿಂದ ವರದಿ ಯಾಗಿದೆ.

ಮೃತಪಟ್ಟವರನ್ನು ಅದೇ ಗ್ರಾಮದ ಸೂರು ಪೂಜಾರಿ (70) ಎಂದು ಗುರುತಿಸಲಾಗಿದೆ.

ಇವರು ಇಂದು ಬೆಳಗ್ಗೆ ತನ್ನ ತೋಟದಲ್ಲಿ ಬರುತಿದ್ದಾಗ ಪಕ್ಕದಲ್ಲೇ ತುಂಬಿ ಹರಿಯುತಿದ್ದ ತೋಡಿಗೆ ಆಕಸ್ಮಿಕವಾಗಿ ಬಿದ್ದಿದ್ದರು. ತೋಡಿನ ನೀರಿನ ಸೆಳೆತ ಜೋರಾಗಿದ್ದರಿಂದ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ಬೈಂದೂರು ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News