ಬಾವಿಗೆ ಹಾರಿ ಆತ್ಮಹತ್ಯೆ

Update: 2020-08-03 16:14 GMT

ಗಂಗೊಳ್ಳಿ, ಆ.3: ವಿಪರೀತ ಹಲ್ಲುನೋವಿನಿಂದ ನರಳುತಿದ್ದು ಚಿಕಿತ್ಸೆ ಮಾಡಿದರೂ ಗುಣವಾಗದ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತ್ರಾಸಿ ಗ್ರಾಮದ ಅನಗೋಡು ಎಂಬಲ್ಲಿಂದ ವರದಿಯಾಗಿದೆ.

ಮಂಜುನಾಥ ಅವಭ್ರತ (53) ಕಳೆದೆರಡು ತಿಂಗಳಿನಿಂದ ವಿಪರೀತ ಹಲ್ಲು ನೋವಿನಿಂದ ಬಳಲುತಿದ್ದು, ಆಯುರ್ವೇದಿಕ್ ಚಿಕಿತ್ಸೆ ಪಡೆದಿದ್ದರೂ ಗುಣವಾಗಿರಲಿಲ್ಲ ಎನ್ನಲಾಗಿದೆ. 3-4ದಿನಗಳಿಂದ ನೋವು ಸಹಿಸಲಸಾಧ್ಯವಾದ ಕಾರಣ, ಚಿಂತೆಯಲ್ಲಿದ್ದ ಅವರು ರವಿವಾರ ರಾತ್ರಿ 9:30ರಿಂದ ಇಂದು ಬೆಳಗ್ಗೆ 8:30ರ ನಡುವಿನ ಅವಧಿಯಲ್ಲಿ ಮನೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆನ್ನಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News