​ಉಚ್ಚಿಲದಲ್ಲಿ ಮರ ಬಿದ್ದು ಅಪಾರ ಹಾನಿ

Update: 2020-08-05 16:39 GMT

ಪಡುಬಿದ್ರಿ, ಆ.5: ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಹಲವು ಕಡೆಗಳಲ್ಲಿ ಅಪಾರ ಹಾನಿ ಉಂಟಾಗಿರುವ ವರದಿಗಳಿವೆ.

ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಅದಮಾರು ಮೂಡಬೆಟ್ಟು ಎಂಬಲ್ಲಿನ ನಿವಾಸಿ ಕುದ್ರೊಟ್ಟು ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಪ್ರಭಾಕರ ಪೂಜಾರಿ ಪಕ್ಕದ ಮನೆಯವರಿಗೆ ಸೇರಿದ ಮರ ಬಿದ್ದಿದೆ. ಇದು ಹಾಲಿನ ಸೊಸೈಟಿ ಮತ್ತು ಪಕ್ಕದಲ್ಲಿ ನಿಲ್ಲಿಸಿದ್ದ ರಿಕ್ಷಾ ಮೇಲೆ ಬಿದ್ದು, ಸುಮಾರು 50 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಇದರಿಂದ ಹಾಲಿನ ಸೊಸೈಟಿಯ ಮಾಡಿನ ಸಿಮೆಂಟು ಶೀಟು ತುಂಡಾಗಿ ಸೊಸೈಟಿ ಒಳಗೆ ಮಳೆ ನೀರು ಬಿದ್ದ ಪರಿಣಾಮ ಅಲ್ಲಿಯ ಯಂತ್ರೋಪಕರಣ ಗಳಿಗೆ ಹಾನಿ ಸಂಭವಿಸಿದೆ. ಮನೆಯ ಆವರಣದ ಪಕ್ಕದಲ್ಲಿ ನಿಲ್ಲಿಸಿದ್ದ ರಿಕ್ಷಾ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ಸ್ಥಳಕ್ಕೆ ಉಚ್ಚಿಲ ಬಡಾಗ್ರಾಮ ಪಂಚಾಯತ್ ಗ್ರಾಮ ಕರಣಿಕ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿದ್ಯುತ್ ಕಣ್ಣಾಮುಚ್ಚಾಲೆ: ಕಳೆದ ರಾತ್ರಿಯ ಗಾಳಿ, ಮಳೆಯಿಂದ ಪಡುಬಿದ್ರಿ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬುಧವಾರ ಸಂಜೆ ಯವರೆಗೂ ವಿದ್ಯುತ್ ಪದೇ ಪದೇ ಕಡಿತವಾಗುತಿದ್ದು, ಹಲವಡೆ ಮರ ಬಿದ್ದು ಹಾನಿ ಉಂಟಾಗಿರುವುದರಿಂದ ವಿದ್ಯುತ್ ಅಡಚಣೆ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News