ಕಾಂಗ್ರೆಸ್ ತಾತ್ಕಾಲಿಕ ಯಶಸ್ಸಿಗಾಗಿ ತಲೆಬಗ್ಗಿಸುತ್ತಿದೆ: ಪಕ್ಷದ ವಿರುದ್ಧ ಕೇರಳದ ಸಂಸದನ ಅಸಮಾಧಾನ
Update: 2020-08-06 17:50 GMT
ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆ ಮತ್ತು ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕತ್ವವು ಬೆಂಬಲ ವ್ಯಕ್ತಪಡಿಸುತ್ತಿರುವುದಕ್ಕೆ ಪಕ್ಷದ ಕೇರಳದ ಸಂಸದರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಈ ನಡೆಯು ‘ತಾತ್ಕಾಲಿಕ ಯಶಸ್ಸಿಗಾಗಿ ತಲೆಬಗ್ಗಿಸುತ್ತಿರುವುದಾಗಿದೆ’ ಎಂದು ತ್ರಿಶೂರಿನ ಕಾಂಗ್ರೆಸ್ ಸಂಸದ ಟಿ.ಎನ್. ಪ್ರತಾಪನ್ ಹೇಳಿದ್ದಾರೆ.
“ಮೃದು ಧೋರಣೆಯ ಮೂಲಕ ನಾವು ತೀವ್ರ ಧಾರ್ಮಿಕ ರಾಷ್ಟ್ರೀಯತೆಯ ಬೆನ್ನುಹತ್ತಲು ಸಾಧ್ಯವಿಲ್ಲ” ಎಂದು ಸೋನಿಯಾ ಗಾಂಧಿಯವರಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಹೇಳಿಕೆಗಳಿಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.