ಉಪ್ಪಿನಂಗಡಿಯಲ್ಲಿ ಹೊಳೆಗೆ ಬಿದ್ದ ಪಿಕಪ್: ಚಾಲಕ ಅಪಾಯದಿಂದ ಪಾರು

Update: 2020-08-08 07:08 GMT

ಪುತ್ತೂರು, ಆ.8: ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಸಮೀಪ ಶನಿವಾರ 11 ಗಂಟೆಯ ಸುಮಾರಿಗೆ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. 

ಆರಿಫ್ ಕೊಲ್ಪೆ ಎಂಬವರ ಈ ಪಿಕಪ್ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸಂದರ್ಭ ನೀರಕಟ್ಟೆ ಸಮೀಪದ ಕಾಂಚನ ಕ್ರಾಸ್ ಸಮೀಪ ಈ ಅವಘಡ ಸಂಭವಿಸಿದೆ. ಆರಿಫ್ ಅವರೇ ಪಿಕಪ್ ಚಲಾಯಿಸುತ್ತಿದ್ದು, ಭಾರೀ ಮಳೆಯಿಂದಾಗಿ ಪಿಕಪ್ ನಿಯಂತ್ರಣ ತಪ್ಪಿ ಪಕ್ಕದ ಹೊಳೆಗೆ ಬಿತ್ತೆನ್ನಲಾಗಿದೆ. ಈ ಸಂದರ್ಭ ವಾಹನದಿಂದ ಹಾರಿದ ಆರಿಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಳಿಕ ಪಿಕಪ್ ನೀರಿನಲ್ಲಿ ಉರುಳುತ್ತಾ ಸ್ವಲ್ಪದೂರ ಸಾಗಿದ್ದು, ಸ್ಥಳೀಯರ ಸಹಕಾರದಲ್ಲಿ ಅದನ್ನು ಮೇಲೆತ್ತಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News