ಪ್ರಚೋದನಕಾರಿ ಭಾಷಣ : ಬಜರಂಗದಳ ಮುಖಂಡನ ವಿರುದ್ಧ ಬಂಟ್ವಾಳ ಠಾಣೆಗೆ ದೂರು

Update: 2020-08-08 17:00 GMT

ಬಂಟ್ವಾಳ, ಆ.8: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನಡೆದ ದಿನ ಬಜರಂಗದಳದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಜರಂಗದಳದ ಮುಖಂಡನೊಬ್ಬನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ‌‌‌.

ಬಜರಂಗದಳ  ಪುತ್ತೂರು ಸಂಚಾಲಕ ಭರತ್ ಕುಮ್ಡೇಲ್ ಎಂಬಾತನ ವಿರುದ್ಧ ಎಸ್.ಡಿ.ಪಿ.ಐ. ಮುಖಂಡ ಇಕ್ಬಾಲ್ ಅಮೆಮ್ಮಾರ್ ಎಂಬವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಭರತ್ ಕುಮ್ಡೇಲ್ ಬಾಬರಿ ಮಸೀದಿಯಂತೆ ಕಾಶಿ ಮತ್ತು ಮಧುರೈ ಮಸೀದಿಗಳನ್ನು ಧ್ವಂಸ ಮಾಡುವಂತೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದು ಸಮಾಜದ ಸ್ವಾಸ್ಥ ಕೆಡವಲು ಪ್ರಯತ್ನಿಸಿ, ಧಾರ್ಮಿಕ ಭಾವನೆಗೆ ಘಾಸಿಯನ್ನುಂಟು ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ದೂರಿನಲ್ಲಿ ಇಕ್ಬಾಲ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News