ರಿಕ್ಷಾ ಚಾಲಕಿ ಪೆರಣಂಕಿಲ ರಾಜೀವಿ ನಾಯಕ್‌ಗೆ ಸನ್ಮಾನ

Update: 2020-08-08 15:52 GMT

ಹಿರಿಯಡ್ಕ, ಆ.8: ಪೆರ್ಣಂಕಿಲ ಫ್ರೆಂಡ್ಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿ ರುವ ರಿಕ್ಷಾ ಚಾಲಕಿ ಹಾಗೂ ಆಶಾ ಕಾರ್ಯಕರ್ತೆಯಾಗಿರುವ ಪೆರ್ಣಂಕಿಲ ಗ್ರಾಮದ ರಾಜೀವ್ ಆರ್.ನಾಯಕ್ ಅವರನ್ನು ಆ.7ರಂದು ಸನ್ಮಾನಿಸಲಾಯಿತು.

ಈ ಪ್ರಯುಕ್ತ ಪರ್ಣಂಕಿಲ ಜಯಪ್ರಕಾಶ್ ಕಾಮತ್ ಮತ್ತು ಗುರುದಾಸ್ ಭಂಡಾರಿ ಮಾರ್ಗದರ್ಶನದಲ್ಲಿ ಸಂಸ್ಥೆಯ ವತಿಯಿಂದ ರಾಜೀವ್ ನಾಯಕ್ ಅವರ ಮನೆಯ ಆವರಣ ಗೋಡೆ, ಗೇಟ್, ರಸ್ತೆಯಿಂದ ಮನೆ ಸಂಪರ್ಕದ ಮೋರಿಯನ್ನು ನಿರ್ಮಿಸಿಕೊಡಲಾಯಿತು.

ಈ ಕಾಮಗಾರಿಗಳನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ತಾಪಂ ಸದಸ್ಯ ಲಕ್ಷ್ಮೀನಾರಾಯಣ ನಾಯಕ್, ಕಾಂಗ್ರೆಸ್ ಯುವ ನಾಯಕ ಉದ್ಯಮಿ ಅಲೆವೂರು ಹರೀಶ್ ಕಿಣಿ, ಅಜೆಕಾರು ಸಹಕಾರಿ ಸಂಘ ಅಧ್ಯಕ್ಷ ಭವಾನಿ ಶಂಕರ್ ನಾಯಕ್, ಸಂಸ್ಥೆಯ ಅಧ್ಯಕ್ಷ ಮನೀಶ್ ಭಟ್, ಕಾರ್ಯದರ್ಶಿ ನಾಗಭೂಷಣ ನಾಯಕ್, ತಾಪಂ ಸದಸ್ಯೆ ಸಂಧ್ಯಾ ಶೆಟ್ಟಿ ಕೋಡಿ ಬೆಟ್ಟು, ಗ್ರಾಪಂ ಉಪಾಧ್ಯಕ್ಷ ಗಣೇಶ ಶೆಟ್ಟಿ ಪಡುಬೆಟ್ಟು, ಗ್ರಾಪಂ ಸದಸ್ಯರಾದ ಕುದಿ ಸಂತೋಷ್ ಶೆಟ್ಟಿ, ಚರಣ್ ವಿಠಲ್, ಮಾಜಿ ಸದಸ್ಯರಾದ ಲತಾ ಕಾಮತ್, ಸುಂದರ ಸೇರಿಗಾರ್, ಪ್ರಕಾಶ್ ಶೆಟ್ಟಿ ಮರ್ವಾಡಿ, ಗಣಪಯ್ಯ ನಾಯಕ್ ಪೆರಣಂಕಿಲ, ಮರಾಠಿ ಸಂಘದ ಅಧ್ಯಕ್ಷ ಲಕ್ಷ್ಮಣ್ ನಾಯಕ್, ಸದಾನಂದ ವಾಗ್ಲೆ, ಉಪೇಂದ್ರ ವಾಗ್ಲೆ, ಸದಾನಂದ ಪ್ರಭು ಉಪಸ್ಥಿತರಿದ್ದರು. ಉಪನ್ಯಾಸಕ ಸುಧೀರ್ ಚಿಂಬೆಲ್ಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News