ಜಮ್ಮು-ಕಾಶ್ಮೀರ: ಉಗ್ರರ ಗುಂಡಿನ ದಾಳಿಗೆ ಬಿಜೆಪಿ ನಾಯಕನಿಗೆ ಗಾಯ

Update: 2020-08-09 06:09 GMT

ಶ್ರೀನಗರ, ಆ.9: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಗಾಯಗೊಂಡಿರುವ ಬಿಜೆಪಿ ನಾಯಕನೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದರು.

ಗಾಯಗೊಂಡಿರುವ ಮುಖಂಡನನ್ನು ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದ್ದು, ಬುದ್ಗಾಂ ಜಿಲ್ಲೆಯ ಹಿಂದುಳಿದ ವರ್ಗ(ಒಬಿಸಿ)ಮೋರ್ಚಾದ ಅಧ್ಯಕ್ಷರಾಗಿದ್ದರು. ಅಬ್ದುಲ್ ಹಮೀದ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಮೀದ್ ಬುದ್ಗಾಂನ ಮಹೆಂದ್‌ಪೊರ ಪ್ರದೇಶದ ನಿವಾಸಿಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್‌ನ ಬುದ್ಗಾಂ ಎಸ್‌ಎಸ್‌ಪಿ ಅಮೋದ್ ನಾಗ್‌ಪುರಿ ತಿಳಿಸಿದ್ದಾರೆ.

ಆಗಸ್ಟ್ 6 ರಂದು ಬಿಜೆಪಿ ಸರಪಂಚ ಸಜಾದ್ ಅಹ್ಮದ್ ಕುಲ್ಗಾಂನಲ್ಲಿ ಉಗ್ರರ ಗುಂಡಿನ ದಾಳಿಗೆ ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಜುಲೈನಲ್ಲಿ ಬಂಡಿಪೊರದ ಬಿಜೆಪಿಯ ಮಾಜಿ ಅಧ್ಯಕ್ಷ ವಸೀಂ ಬಾರಿ, ಅವರ ತಂದೆ ಹಾಗೂ ಸಹೋದರರು ಉಗ್ರರ ಗುಂಡಿನ ದಾಳಿಗೆ ತೀವ್ರ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News