ಕೆಲಸ ಇಲ್ಲದ ಚಿಂತೆ: ಆತ್ಮಹತ್ಯೆ

Update: 2020-08-09 17:18 GMT

ಪಡುಬಿದ್ರಿ: ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತಿದ್ದ ಯುವಕನೋರ್ವ ಕೆಲಸ ಇಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಪುಷ್ಪರಾಜ್ (37). ಈತ 15ವರ್ಷದಿಂದ ಮಂಗಳೂರಿನ ಪಿವಿಎಸ್ ಬಳಿ ಇರುವ ಕಾಗ್ನಿಜೆಂಟ್ ಕಂಪನಿಯಲ್ಲಿ ಸಾಫ್ಟ್‍ವೇರ್ ಕೆಲಸ ಮಾಡಿಕೊಂಡಿದ್ದರು. ಕೋವಿಡ್-19 ಬಳಿಕ ಲಾಕ್‍ಡೌನ್ ಉಂಟಾಗಿದ್ದು, ಒಂದು ತಿಂಗಳ ಹಿಂದೆ ಕೆಲಸದಿಂದ ತೆಗೆದಿದ್ದರು. ನಂತಹ ಕೆಲಸ ಇಲ್ಲದೆ ಮನೆಯಲ್ಲಿ ಇದ್ದನು. ಇದೇ ಬೇಸರದಿಂದ ಮದ್ಯಪಾನ ಮಾಡುತಿದ್ದನು. ಶನಿವಾರ ಸಂಜೆ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಬಗ್ಗೆ ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News