ರಾಜಸ್ಥಾನದಲ್ಲಿ ಆಪರೇಶನ್ ಕಮಲ ವಿಫಲ: ಶಿವಸೇನೆ ಟೀಕೆ

Update: 2020-08-12 08:25 GMT

ಮುಂಬೈ, ಆ.12:ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಆಪರೇಶನ್ ಕಮಲಕ್ಕೆ ಸೋಲುಂಟಾಗಿದೆ. ಇದು ರಾಜಕೀಯ ವಿಕೃತತೆಯ ಸೋಲು ಎಂದು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ವಿಶ್ಲೇಷಿಸಿದೆ.

 ಪಕ್ಷದ ಮುಖವಾಣಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಶಿವಸೇನೆ,ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಆಪರೇಶನ್ ಕಮಲ ಮಾಡುವ ಬಿಜೆಪಿಯವರಿಗೆ ಆಪರೇಶನ್ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.

ಗೆಹ್ಲೋಟ್ ಮುಂದೆ ಸಚಿನ್ ಪೈಲಟ್ ದುರ್ಬಲ ಆಟಗಾರ ಎಂದು ಬಣ್ಣಿಸಿರುವ ಶಿವಸೇನೆ, ಈ ಎಲ್ಲ ಬೆಳವಣಿಗೆಗಳಿಂದ ಇನ್ನು ಮುಂದಾದರೂ ಬಿಜೆಪಿ ಪಾಠ ಕಲಿಯಬೇಕಿದೆ ಎಂದು ಅದು ಕಿವಿಮಾತು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News