ಬನ್ನೂರು: ಎಸ್‌ಡಿಪಿಐಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-15 06:47 GMT

ಪುತ್ತೂರು, ಆ.15: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಎಸ್‌ಡಿಪಿಐ ಬನ್ನೂರು ಘಟಕದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಗರಸಭೆಯ ಸದಸ್ಯೆ ಫಾತಿಮತ್ ಝೊಹರಾ ದ್ವಜಾರೋಹಣಗೈದರು. ಎಸ್‌ಡಿಪಿಐ ನಗರ ಸಮಿತಿಯ ಅಧ್ಯಕ್ಷ ಬಶೀರ್ ಕೂರ್ನಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ಬನ್ನೂರು ಘಟಕಾಧ್ಯಕ್ಷ ಮುಹಮ್ಮದ್, ಸಿಲ್‌ಸಿಲಾ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹೀಂ ಕೆ.ಎಂ., ಎಂವೈಎಫ್ ಅಧ್ಯಕ್ಷ ಅಝರ್, ಎಸ್‌ಡಿಪಿಐ ಪಡೀಲ್ ಘಟಕದ ಅಧ್ಯಕ್ಷ ಮುಹಮ್ಮದ್ ಮೋನು, ಪಿಎಫ್‌ಐ ಬನ್ನೂರು ಘಟಕಾಧ್ಯಕ್ಷ ಸಂಶುದ್ದೀನ್, ರಜಬ್ ಸಾಹೇಬ್ ಉಪಸ್ಥಿತರಿದ್ದರು.

ಅಬ್ದುಲ್ ರಹಿಮಾನ್ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಭೇಟಿ!
ಕೆಲವು ಸಮಯದಿಂದ ಬನ್ನೂರು ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಷ್ಟ್ರ ಪಕ್ಷಿ ನವಿಲು ಎಸ್‌ಡಿಪಿಐಯಿಂದ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣದ ಸಂದರ್ಭದಲ್ಲಿ ಆಗಮಿಸಿ ಗಮನಸೆಳೆಯಿತು. ಧ್ವಜಾರೋಹಣ ನಡೆಯುತ್ತಿದ್ದ ವೇಳೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ನಿಂತಿದ್ದ ನವಿಲು ನೆರೆದವರ ಗಮನಸೆಳೆಯಿತು.

ವರದಿ: ಫರಾಝ್ ಬಿ.ಎಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News