ಹಳೆಕೋಟೆ : ಸಯ್ಯಿದ್ ಮದನಿ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ
Update: 2020-08-15 17:35 GMT
ಉಳ್ಳಾಲದ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆಯಲ್ಲಿ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಅಲ್ ಹಾಜ್ ಅಬ್ದುಲ್ ರಶೀದ್ ಧ್ವಜಾರೋಹಣ ಮಾಡುವುದರೊದಿಗೆ ಭಾರತದ 74ನೇ ಸ್ವಾತಂತ್ರ್ಯೊತ್ಸವವನ್ನು ಅಚರಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ,ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಾರ್ಯ ದರ್ಶಿ ಎ.ಕೆ ಮೊಯ್ದನ್,ಉಪಾಧ್ಯಕ್ಷ ಇಬ್ರಾಹಿಂ ಕಕ್ಕೆ ತೋಟ,,ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ,ಸದಸ್ಯರುಗಳಾದ ಎಂಎಚ್ ಇಬ್ರಾಹಿಂ,ಅಲ್ತಾಫ್ ಯು ಎಚ್,ಮಹಮ್ಮದ್ ಮೇಸ್ತ್ರಿ, ಹಾಜಿ ಝೈನುದ್ದೀನ್, ಮಹಮ್ಮದ್ ಹಳೆಕೋಟೆ, ಹಮೀದಾಕ, ಪೈಝಲ್ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿ ವಂದಿಸಿದರು.