ಎಸ್ಸೆಸ್ಸೆಫ್ ಮೇನಾಲ ಶಾಖಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2020-08-15 17:51 GMT

ಎಸ್ಸೆಸ್ಸೆಫ್, ಎಸ್ ವೈ ಎಸ್ ಮೇನಾಲ ಶಾಖಾ ವತಿಯಿಂದ ಮೇನಾಲ ಮಸ್ಜಿದು ಸ್ವಹಾಬಾ  ವಠಾರದಲ್ಲಿ ಸರಳ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಕೆಸಿಎಫ್ ನೇತಾರರಾದ ಅಬ್ದುಲ್ಲಾ ಹನೀಫಿರವರ ದುಹಾಶೀರ್ವಚನ ದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಎಸ್ಸೆಸ್ಸೆಫ್ ಶಾಖಾ ಪ್ರಧಾನ ಕಾರ್ಯದರ್ಶಿ ಅಬ್ಬು ಎ.ಎಚ್. ಸ್ವಾಗತ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಶಾಖಾ ಅಧ್ಯಕ್ಷರಾದ ಇಸ್'ಹಾಕ್ ಮಿಸ್ಬಾಹಿ  ಹಾಗೂ ಎಸ್ ವೈಎಸ್ ಅಧ್ಯಕ್ಷ ಅಬ್ದುಲ್ಲ ಉಸ್ತಾದ್  ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ಮೊಹಲ್ಲಾ ಪ್ರಧಾನ  ಕಾರ್ಯದರ್ಶಿ ಝಕರಿಯ ಸಖಾಫಿ ಯವರು ದೇಶಪ್ರೇಮವು ವಿಶ್ವಾಸದ ಭಾಗವಾಗಿದೆ ಎಂಬ  ಪ್ರವಾದಿ ವಚನವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಸ್ಜಿದು ಸ್ವಹಾಬಾ ಉಪಾಧ್ಯಕ್ಷರಾದ ಖಾಲಿದ್ ಎಂ.ಎ. ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ, ಕೆಸಿಎಫ್ ನೇತಾರರಾದ ರಹೀಂ ಖತರ್, ಹಾರಿಸ್ ಪಿ.ಎಸ್, ಉಮ್ಮರ್ ಎಂ‌.ಇ., ಇಸ್ಮಾಈಲ್ ಎಂ.ಎ., ಬಶೀರ್ ಝೈನಿ, ಸಾದಿಕ್ ಇಂದಾದಿ, ರಝಾಕ್ ಬಿ.ಎಂ, ಮುಸ್ತಫಾ ದರ್ಕಾಸ್, ಹಕೀಂ ಮದನಿ, ಅಬ್ದುಲ್ಲಾ ಮೆಣಸಿನಕಾನ, ಅತ್ತಂಡಿ ಮುಹಮ್ಮದ್, ಸಂಶು ನೀರಳಿಕೆ   ಹಾಗೂ ಶಾಖಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ -2020 ನೇ ಸಾಲಿನ  ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ  519 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ   ಆಯಿಷತ್ ಅಫ್ನ ರವರಿಗೆ ಯೂನಿಟ್ ವತಿಯಿಂದ  ಅಭಿನಂದನಾ ಫಲಕ ನೀಡಿ ಸನ್ಮಾನಿಸಲಾಯಿತು. ಶಫೀಖ್ ಎಂ.ಎ. ಮೇನಾಲ ಹಾಗೂ ಬಳಗ ರಾಷ್ಟ್ರಗೀತೆಯನ್ನು ಹಾಡಿದರು. ಕೊನೆಯಲ್ಲಿ ಶಫೀಕ್ ಸ'ಅದಿ ಬಿ.ಸಿ. ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News