ಇಸ್ಪೀಟು ಜುಗಾರಿ: 24 ಮಂದಿ ಬಂಧನ

Update: 2020-08-17 16:28 GMT

ಕುಂದಾಪುರ, ಆ.17: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಒಟ್ಟು 24 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಡೇರಹೋಬಳಿ ಗ್ರಾಮದ ನಂದಿಬೆಟ್ಟು ಬಳಿ ಆ.17ರಂದು ಬೆಳಗ್ಗೆ ಜುಗಾರಿ ಆಡುತ್ತಿದ್ದ ಸಂಪತ್(38), ಸಂದೀಪ(35), ಅಭೀಷೇಕ್(21), ಅನಿಲ್(40), ರವಿರಾಜ್(38), ಸಂತೋಷ(34), ಗಣೇಶ(34), ಅನಿಲ್ (27), ನಿತೇಶ್ (25), ಅಕ್ಷಯ(22) ಎಂಬವರು ಬಂಧಿಸಿ, 3210ರೂ. ನಗದು, ಎರಡು ಬೈಕು, ಒಂದು ರಿಕ್ಷಾ ಹಾಗೂ 9 ಮೊಬೈಲ್‌ಗಳನ್ನು ವ ಪಡಿಸಿಕೊಳ್ಳಲಾಗಿದೆ.

ವಡೇರಹೋಬಳಿ ಗ್ರಾಮದ ಶಾಸ್ತ್ರೀ ಪಾರ್ಕ್ ಬಳಿಯ ಲಾಡ್ಜ್‌ನಲ್ಲಿ ಆ.15 ರಂದು ಸಂಜೆ ವೇಳೆ ಜುಗಾರಿ ಆಡುತ್ತಿದ್ದ ಸತೀಶ, ಗಣೇಶ, ರಮೇಶ ಮೊಗವೀರ, ರಾಘವೇಂದ್ರ ಶೇರಿಗಾರ್, ಚೇತನ್ ಮೊಗವೀರ, ಸಂದೀಪ, ರಾಘವೇಂದ್ರ, ವಾಸುದೇವ, ಮಾಧವ ಮರಕಾಲ, ವಿಜಯ ಕುಮಾರ್, ಶ್ರೀಧರ, ತೇಜ ಬಿಲ್ಲವ, ಶಿವ ಮೊಗವೀರ, ಶೇಖರ ಶೆಟ್ಟಿ ಎಂಬವರನ್ನು ಬಂಧಿಸಿ, 47,370ರೂ. ನಗದು, 11 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News